ಒಬ್ಬ ತಾಯಿಗೆ


ಜಗದೀಶ್ವರನೆ ವಿಶ್ವಸಂಸಾರಿಯಾಗಿರಲು
ಸಂಸಾರ ಪಾಶವೆಂದೆನಬೇಡವೈ.
ಹುಟ್ಟುಹಾಕಲು ನಿನಗೆ ಬಾರದಿರೆ, ಕೂಡದಿರೆ,
ಬರಿದೆ ನೀಂ ದೋಣಿಯನು ಶಪಿಸಬೇಡೈ!
ಮಾಡುವುದನೆಲ್ಲ ತನ್ನಾತ್ಮಸಾಧನೆಯೆಂದು
ಕರ್ಮಗೈ; ಅದುವೆ ಪೂಜೆಯ ಮರ್ಮವೈ.
ಶಿವನ ಕಾರ್ಯದೊಳಾವು ಶಿರಬಾಗಿ ನೆರವಾಗೆ
ನಮಗದುವೆ ಪರಮಪಾವನ ಧರ್ಮವೈ.
ಹಸುಳೆಯನು ಮೀಯಿಸಲು ಹರನಿಗಭಿಷೇಕವದು;
ಶಿಶುವಿಗೂಡಿಸೆ ಶಿವಗೆ ನೈವೇದ್ಯವೈ!
ಕಂದನಲಿ ಶಿವನ ಕಾಣುವ ಬಂಧನವೆ ಮುಕ್ತಿ;
ತಪಕೊಲ್ಲದದು ತಾಯ್ತನಕೆ ಸಾಧ್ಯವೈ!

                            - ಕುವೆಂಪು
('ಪ್ರೇಮ ಕಾಶ್ಮೀರ' ಕವನ ಸಂಕಲನದಿಂದ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಉನ್ಮಾದದ ನಶೆ ನಮ್ಮೊಂದಿಗಿಷ್ಟು ಹಂಚಿಕೊಳ್ರಿ....