ಮುಕ್ತ ಮುಕ್ತ


ಮಣ್ಣ  ತಿಂದು ಸಿಹಿ  ಹಣ್ಣ  ಕೊಡುವ  ಮರ  ನೀಡಿ  ನೀಡಿ  ಮುಕ್ತ
ಬೇವ  ಅಗಿವ ಸವಿಗಾನದ  ಹಕ್ಕಿ  ಹಾಡಿ ಮುಕ್ತ  ಮುಕ್ತ .

ಹಸಿರ  ತೋಳಿನಲಿ  ಬೆಂಕಿಯ  ಕೂಸ  ಪೊರೆವುದು ತಾಯಿಯ  ಹೃದಯ
ಮರೆಯುವುದುಂಟೆ ಮರೆಯಲಿನಿಂತೆ  ಕಾಯುವ  ಕರುಣಾಮಯಿಯ.

ತನ್ನಾವರಣವೇ ಸೆರೆಮನೆಯಾದರೆ ಜೀವಕೆ  ಎಲ್ಲಿಯ  ಮುಕ್ತಿ
ಬೆಳಕಿನ  ಬಟ್ಟೆಯ  ಬಿಚ್ಚುವ  ಜ್ಯೋತಿಗೆ  ಬಯಲೇ  ಜೀವನ್ಮುಕ್ತಿ

ಇರುಳ ವಿರುದ್ಧ  ಬೆಳಕಿನ  ಯುದ್ಧ  ಕೊನೆಯಿಲ್ಲದ  ಕಾದಾಟ
ತಡೆಯೇ ಇಲ್ಲದೆ ನಡೆಯಲೇ  ಬೇಕು  ಸೋಲಿಲ್ಲದ  ಹೋರಾಟ.

                                                      - ಎಚ್. ಎಸ್. ವೆಂಕಟೇಶ ಮೂರ್ತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಉನ್ಮಾದದ ನಶೆ ನಮ್ಮೊಂದಿಗಿಷ್ಟು ಹಂಚಿಕೊಳ್ರಿ....