ಮುಕ್ತ


ಕಾರಮೋಡ ಮಳೆಯಾಗಿ ಸುರಿದಾಗ, ಕಣ್ಣ ಹನಿಗೆ ಮುಕ್ತಿ.
ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ, ಅದರ ಗರಿಗೆ ಮುಕ್ತಿ.

ಎದೆಯ ನೋವು ಹಾಡಾಗಿ ಹೊಮ್ಮಿದರೆ, ಭಾವಕ್ಕೆ ಬಂಧ ಮುಕ್ತಿ
ಎಂದು ಆದೆವು ನಾವು ಮುಕ್ತ ಮುಕ್ತ ಮುಕ್ತ.

ಏರು ನದಿಗೆ ಇದಿರಾಗಿ ಈಜಿ ದಡ
ಸೇರಬಹುದೆ ಜೀವ, ದಾಟಿ ಈ ಪ್ರವಾಹ?
ತಾನು ಬೆಂದು ತಿಳಿ ಬೆಳಕ ಬೀರುತಿದೆ
ಒಂದು ಇರುಳ ದೀಪ, ನಿಶ್ಚಯದ ಮೂರ್ತ ರೂಪ.

ಮೊಗ್ಗಿನಿಂದ ಸೆರೆ ಒಡೆದ ಗಂಧ
ಹೂವಿಂದ ದೂರ ದೂರ, ಎಲ್ಲುಂಟು ಆಚೆ ತೀರ

ಕಾರಮೋಡ ಮಳೆಯಾಗಿ ಸುರಿದಾಗ, ಕಣ್ಣ ಹನಿಗೆ ಮುಕ್ತಿ
ಮರದ ಹಕ್ಕಿ ಮರಿ ರೆಕ್ಕೆ ಬೀಸಿದರೆ, ಅದರ ಗರಿಗೆ ಮುಕ್ತಿ.

                                            
                                                      -  ಎಚ್. ಎಸ್. ವೆಂಕಟೇಶ ಮೂರ್ತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಉನ್ಮಾದದ ನಶೆ ನಮ್ಮೊಂದಿಗಿಷ್ಟು ಹಂಚಿಕೊಳ್ರಿ....